IMG-9328-Original

kannada habba

ಹಿರಿಯ ಸಾಹಿತಿಗಳಾದ ಶ್ರೀ ನಾಡೋಜ

ಡಾ.ಬರಗೂರು ರಾಮಚಂದ್ರಪ್ಪ ನವರು..

ಅವರ ಮಾತುಗಳಲ್ಲಿ ಕನ್ನಡಾಂಬೆಯ ಬಗ್ಗೆ ಕೇಳುವುದೇ ಅದ್ಭುತ..ಸಮಾಜಸೇವೆಯು ಒಂದು ಭಾಷೆ ಅಂದ್ರು, ಅವರ ಮಾತುಗಳಿಂದ ಗೊತ್ತಿಲ್ಲದ ಹಲವು ವಿಚಾರಗಳು ವಿಷಯಗಳು ತಿಳಿದುಕೊಂಡೆ ..

IMG-4257-Original

Yuvaratna appu award ( 2021 )

ನನ್ನ ಅಳಿಲು ಸೇವೆಯನ್ನು ಗುರುತಿಸಿ ನಮ್ಮ ಅಪ್ಪು ಸರ್ ಅವರ ಹೆಸರಿನಲ್ಲಿ “ಯುವರತ್ನ ಅಪ್ಪು ಅವಾರ್ಡ್” ಅನ್ನು ನನಗೆ ನೀಡುತ್ತಿರುವ ಹೈಬ್ರೀಡ್ ನ್ಯೂಸ್ ಅವರಿಗೆ ಧನ್ಯವಾದಗಳು

IMG-3664-Original

Hemmeya kannadiga award

ಮೊನ್ನೆ ಸ್ಪೃತಿ ಸಾಧನ ತಂಡದಿಂದ ಕನ್ನಡ ರಾಜ್ಯೋತ್ಸವದ  ಪ್ರಯುಕ್ತ  ಹಮ್ಮಿಕೊಳ್ಳಲಾಗಿದ್ದ “ನಮ್ಮ ಹೆಮ್ಮೆಯ ಕನ್ನಡಿಗ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ,ಹೆಮ್ಮೆಯ ಕನ್ನಡಿಗ ಎನ್ನುವ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ,ಎಂದೆಂದಿಗೂ ನಾನು ಹೆಮ್ಮೆಯ ಕನ್ನಡತಿಯಾಗೆ ಉಳಿಯುತ್ತೇನೆ.

ಈ ಸಮಾರಂಭವನ್ನು #ಅಪ್ಪು_ಬಾಸ್ ಅವರಿಗೆ ಶ್ರದ್ಧಾಂಜಲಿ ಕೋರಿ ಅವರಿಗಾಗೆ ಅರ್ಪಿಸಲಾಯಿತು.

ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ ಸ್ಪೃತಿ ಸಾಧನ ತಂಡಕ್ಕೆ ನನ್ನ ಹೃದಯಪೂರ್ವಕ‌ ಧನ್ಯವಾದಗಳು

6a0cbd3f-121c-4c93-91e7-a7bc396a130f-Original

Dance tournament

ವಿ ಸಿಂಪ್ಲಿಫೈ ಚಾರಿಟಬಲ್ ಟ್ರಸ್ಟ್    (V simplify charitable trust) ನ ವತಿಯಿಂದ ಆಯೋಜಿಸಿದ್ದ “ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್” ಅವರ ಸ್ಮರಣಾರ್ಥ ರಾಜ್ಯಾದ್ಯಂತ ನೃತ್ಯ ಸ್ಪರ್ಧೆಯಲ್ಲಿ  ಭಾಗವಹಿಸಿದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ಮಹಿಳಾ ಘಟಕ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿಕೊಟ್ಟಿತು. ಈ ರೀತಿಯಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಗಳು ಇನ್ನಷ್ಟು ಹೆಚ್ಚಾಗಲಿ ಎಂಬುದೇ ನಮ್ಮ ಹಾರೈಕೆ

F75DE0BB-1316-426A-9740-1CC66123D99B-Original

Auto rickshaw day momentous ( peace auto )

ಶಂಕರ್_ನಾಗ್ ಸರ್ ಅವರ ಜನುಮದಿನದ ಪ್ರಯುಕ್ತ ಹಾಗೂ ಆಟೋ ರಿಕ್ಷಾ ದಿನಾಚರಣೆ ಪ್ರಯುಕ್ತ  ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ..ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ #Peace_Auto ತಂಡಕ್ಕೆ ನನ್ನ ಹೃದಯಪೂರ್ವಕ‌ ಧನ್ಯವಾದಗಳು ಪಿಸ್ಆಟೋ ಅಧ್ಯಕ್ಷರು ರಘುನಾರಾಯಣಗೌಡ್ರು, ನಟ ಲೂಸ್ ಮಾದಯೋಗಿ, ನಟ ಡಾರ್ಲಿಂಗ್ ಕೃಷ್ಣ , ನಟಿ ಮೇಘಶೆಟ್ಟಿ , ನಟಿ ನಿಶ್ವಿಕಾ ನಾಯ್ಡು , ನಿಮ್ಮೆಲ್ಲರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

IMG-9142-Original

Bengaluru women’s achiever 2022 award ( B.Pac )

B.PAC ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಮಹಿಳಾ ಸಾಧಕಿಯರ ಪ್ರಶಸ್ತಿ ( Bangalore Women Achievers Award -2022) ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಬಹಳ ಹೆಮ್ಮೆಯನಿಸಿತು,ಈ ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವನ್ ಹರ್ಷದ್, ಸೌಮ್ಯ ರೆಡ್ಡಿ, ಹಾಗೂ ಸಂತೋಷ್ ಲಾಡ್ ಅವರು

ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು…

IMG-2923-Original

Anu Bajatham Foundation donated Bajatham van Sidganga matt

“ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು”

ನನ್ನ ಬಹುದಿನಗಳ ಕನಸು ಇಂದು ಕಾರ್ಯರೂಪಕ್ಕೆ ..

ನಮ್ಮ ಭಜತಾಂ ಫೌಂಡೇಶನ್ ವತಿಯಿಂದ #ಸರ್ವಂ_ಪುನೀತಂ ಎಂಬ ಹೆಸರಿನಿಂದ ಮೂಕಪ್ರಾಣಿಗಳಿಗೆ ಹಾಗೂ ನಿರಾಶಿತರಿಗೆ ,ಕೆಲವು ಆಸ್ಪತ್ರೆಗಳಿಗೆ ನಿರಂತರ ಅನ್ನದಾಸೋಹಕ್ಕೆ ಇಂದು #ವಾಹನ ಚಾಲನೆಗೊಂಡಿದೆ ..

ನಿಮ್ಮೆಲ್ಲರ ಪ್ರೋತ್ಸಾಹ ,ಬೆಂಬಲದಿಂದ ಹಾಗೂ #ಅಪ್ಪು ಸರ್ ಅವರ ಆಶೀರ್ವಾದದೊಂದಿಗೆ ನಿರಂತರವಾಗಿ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿರಲಿ ..

IMG-9577-Original

Launch Bajatham Foundation

ನಾವು ಸಮಾಜದ ಒಳಿತಿಗಾಗಿ ದುಡಿಯಬೇಕೆಂಬ ಉದ್ದೇಶದಿಂದ ಆರಂಭಿಸಿರುವ “ಭಜತಾಂ ಫೌಂಡೇಶನ್” ಅನ್ನು ಖ್ಯಾತ ಚಲನಚಿತ್ರ ನಟರಾದ ಚೇತನ್ ಅಹಿಂಸಾ ಅವರು ಇಂದು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದರು,ನಮಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ..

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ನಾವು ನಮ್ಮ ಕಡೆಯಿಂದ ನಿರಾಶ್ರಿತರ ಆಶ್ರಮಕ್ಕೆ ಆ್ಯಂಬುಲೆನ್ಸ್ ಕೊಡುಗೆಯಾಗಿ ಕೊಟ್ಟಿದ್ದೆವು,ಆ ಆ್ಯಂಬುಲೆನ್ಸ್ ಇದುವರೆಗೂ ನೂರಾರು ಜನಕ್ಕೆ ಅನುಕೂಲವಾಗಿ ಜೀವ ಉಳಿಸುವಲ್ಲಿ ಮುಖ್ಯಪಾತ್ರ ವಹಿಸಿದೆ ಎಂಬ ಖುಷಿ ನಮಗಿದೆ.

ಈಗ  ಈ ಸೇವೆಯನ್ನು ಮುಂದುವರೆಸಿದ್ದು ನಮ್ಮ “ಭಜತಾಂ ಫೌಂಡೇಶನ್” ವತಿಯಿಂದ,ಸಿನಿಮಾದಲ್ಲಿ ದುಡಿಯುವ ಜ್ಯೂನಿಯರ್ ಆರ್ಟಿಸ್ಟ್ ಗಳ ಅನುಕೂಲಕ್ಕಾಗಿ ಸಹಕಲಾವಿದರ ಒಕ್ಕೂಟಕ್ಕೆ ಮತ್ತೊಂದು ಆ್ಯಂಬುಲೆನ್ಸನ್ನು‌ ಸದ್ಯದಲ್ಲೇ ಕೊಡುಗೆಯಾಗಿ ನೀಡಬೇಕೆಂದು ನಿರ್ಧರಿಸಿದ್ದೇವೆ,ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸಹಕಲಾವಿದರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾದರೂ ಈ ಆ್ಯಂಬುಲೆನ್ಸ್ ಅವರ ಸಹಾಯಕ್ಕಾಗಿ ಕಾದಿರುತ್ತದೆ.ಈ ಕೆಲಸಕ್ಕೆ ಕೆಲವು ನಟರು‌ ಮತ್ತು ನಿರ್ಮಾಪಕರು ತಮ್ಮ ಸಹಾಯ ಹಸ್ತ ಚಾಚಿದ್ದಾರೆ.

ನಮ್ಮ ಫೌಂಡೇಶನ್ ವತಿಯಿಂದ ಇದೇ ರೀತಿಯಲ್ಲಿ ಮುಂದೆ ಕೂಡ ಅವಶ್ಯಕತೆಯಿರುವ ಕಡೆಗಳಲ್ಲೆಲ್ಲ ಆ್ಯಂಬುಲೆನ್ಸ್ ನೀಡುವ ಗುರಿಯಿದೆ, ಇದರ ಜೊತೆ ಇನ್ನೂ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ನಮ್ಮ  ಭಜತಾಂ ಫೌಂಡೇಶನ್ನಿಗಿದೆ.  ಈ ನಮ್ಮ ಕೆಲಸಗಳಿಗೆ  ನಿಮ್ಮ ಬೆಂಬಲ ಮತ್ತು ಸಹಕಾರ ಸದಾ ಇರಲಿ ..